Thursday, July 29, 2010

ಐಶ್ವರ್ಯ ರೈ..

ಮೈತುಂಬಾ ವಡವೆ ಕೈ ತುಂಬಾ ಹಣ
ಮೈತುಂಬಾ ವಡವೆ ಕೈ ತುಂಬಾ ಹಣ
ಹೊತ್ತು ತರುವವಳು ಹೇಗಿದ್ದರೂ ಸೈ
ಅವಳೇ ನನ್ನ ಪಾಲಿಗೆ ಐಶ್ವರ್ಯ ರೈ

ಎಲ್ಲೋ ಓದಿದ್ದು

Friday, June 4, 2010

ಸೋರುತಿಹುದು ಬಸ್ಸಿನ ಮಾಳಿಗೆ.

ಬಿ ಎಮ್ ಟಿ ಸಿ ಗೊಂದು ಬಹಿರಂಗ ಓಲೆ...
ಬಿ ಎಮ್ ಟಿ ಸಿ ಒನ್ದು ದೊಡ್ಡ ಸಾರಿಗೆ ಸಂಸ್ಥೆಯಾಗಿದ್ದು, ಇವತ್ತು ಬೆಂಗಳೂರು ಜನರ ಜೀವನಾಡಿಯಾಗಿದೆ.
ದಿನಾಲು ಸುಮಾರು ಲಕ್ಶ್ಯ ಜನರನ್ನು ಸಾಗಿಸುವ ಸಾರಿಗೆ ಬಸ್ಸುಗಳು ಮಳೆಗಾಲದಲ್ಲಿ ಸೋರುತ್ತವೆ. ಯಾವಾಗಲು ಬಸ್ಸಿನಲ್ಲೇ ಪಯಣಿಸುವ ನಮ್ಮಂಥ ಪ್ರಯಾಣಿಕರಿಗೆ ಇದರಿಂದ ತುಂಬಾ ತೊಂದರೆಯಾಗುತ್ತಿದೆ. ಆದಕಾರಣ ಈ ಓಲೆ.

ಗೆ,

ವ್ಯವಸ್ಥಾಪಕರು,

ಬೆಂಗಳೂರು ಮಹಾನಗರ ಸಾರಿಗೆ ಸಮ್ಸ್ಥೆ.

ಬೆನ್ಗಳೂರು.

ವಿಶಯ: ಬಸ್ಸಿನ ಮಾಳಿಗೆ ಸೋರುವ ಕುರಿತು.

ಮಾನ್ಯ ವ್ಯವಸ್ಥಾಪಕರಿಗೆ,

ಮಾನ್ಯರೆ, ಬೆನ್ಗಳೂರು ಮಹಾನಗರ ಸಾರಿಗೆ ಸಂಸ್ಥೆ ಹಲವಾರು ಜನಪ್ರೀಯ ಕಾರ್ಯಕ್ರಮಗಳ ಮೂಲಕ ಜನರ ಮನ ಗೆದ್ದಿದೆ.

ಆದರೆ ಹಲವು ಬಸ್ಸುಗಳಲ್ಲಿ ಕೆಲವು ಸಮಸ್ಯೆಗಳಿವೆ..

೧. ಸಂಸ್ಥೆಯ ಶೇಕಡಾ ೬೦ ವಾಹನಗಳ ಮಾಳಿಗೆ ಸೋರುತ್ತದೆ.

ಇನ್ತಹ ಮಳೆಗಾಲದ ದಿನಗಳಲ್ಲಿ ಪ್ರಯಾಣಿಕರು ಪರಿತಪಿಸುವನ್ತಾಗಿದೆ. ಬಸ್ಸಿನ ಕಿಟಕಿಗಳು ಸರಿಯಾಗಿ ಮುಚ್ಚೋದಕ್ಕೆ ತೆರೆಯೋದಕ್ಕೆ ಬರುವುದಿಲ್ಲ.

ಬಸ್ಸಿನ ಮಾಳಿಗೆ ಎಲ್ಲೆಂದರಲ್ಲಿ ಸೋರುತ್ತಿರುತ್ತದೆ. ಮತ್ತು ಸೀಟುಗಳ ಮೆಲೆ ನೀರು ಬಿದ್ದು ಕುಳಿತ ಪ್ರಯಾಣಿಕರಿಗೂ ತೊಂದರೆ ಉಂಟಾಗುತ್ತದೆ.

ಯೋಚನೆ ಮಾಡಿ ದಿನಕ್ಕೆ ಲಕ್ಶಗಟ್ಟಲೆ ಪ್ರಯಾಣಿಕರನ್ನು ಸಾಗಿಸುವ ಬಿ ಎಮ್ ಟಿ ಸಿ. ಇದರ ಬಗ್ಗೆ ಗಮನ ಕೊಟ್ಟಂತಿಲ್ಲ.

೨. ಟಾಟಾ ಮಾರ್ಕೋಪೊಲೊ ಬಸ್ಸು ನೋಡಲು ಚೆನ್ನಾಗಿದೆ ಆದರೆ ಜನರ ಮನ ಗೆಲ್ಲುವಲ್ಲಿ ವಿಫಲವಾಗಿದೆ.

ಅದರ ಅಡಚನೆಗಳು...

ವಾಯು ಮತ್ತು ಮಾಲಿನ್ಯ.. ಈ ಬಸ್ಸುಗಳು ತುಂಬ ವಾಯುಮಾಲಿನ್ಯ ಮಾಡುತ್ತವೆ ಹಾಗೂ ಕರ್ಕಶ ಶಬ್ದದೊನ್ದಿಗೆ ಕಿವಿ ಗಡಚಿಕ್ಕುತ್ತವೆ.

ವ್ಯವಸ್ಥಾಪಕರು ಈ ಮೇಲಿನ ಅಡಚಣೆಗಳನ್ನು ಗಮನಿಸಿ, ಗುಣಮಟ್ಟವನ್ನು ಸುಧಾರಿಸಲು ಒತ್ತು ಕೊಡಬೇಕು.... ಮತ್ತೆ ಈ ಬಗ್ಗೆ ಗಮನವಹಿಸಿ ಸುಧಾರಣೆ ತರುತ್ತೀರೆನ್ದು ಭಾವಿಸಿದ್ದೆನೆ.



ಇಂದ,

ಗಿರೀಶ ರಾಜನಾಳ.

ಶಿವನಗರ, ಬೆನ್ಗಳೂರು.

೯೭೩೯೮೬೬೬೧೧

ಇನ್ನೂ ಕೆಲವು ಸಮಸ್ಯೆಗಳಿದ್ದರೆ ನನ್ನೊನ್ದಿಗೆ ಹನ್ಚಿಕೊಳ್ಳಿ. ಬನ್ನಿ ಬಿ ಎಮ್ ಟಿ ಸಿ ಅವರಿಗೆ ದೂರು ನೀಡೋಣ.
http://www.bmtcinfo.com/sitekan/BSComplaints.jsp

Tuesday, May 25, 2010

ನಮ್ಮ ಅವ್ವಾ...

ಗೆಳೆಯರೆ,
ನನ್ನ ಗೆಳೆಯನ ಹತ್ತಿರ ಈ ಒಂದು ಹಾಡು ಇತ್ತು..ನಾನಿದನ್ನ ಎಲ್ಲಿಂದ ತಂದೆ ಅಂತ ಕೇಳಿದೆ. ಅವ ಹೇಳಿದ, ಹಿಂಗ ಒಂದು ಮೇಲ್ ನಿಂದ ಮೇಲ್ ಗೆ ಬಂದಿದ್ದು ಅಂತ ಅಂದ. ಅದನ್ನು ಇಲ್ಲಿ ಹಾಕೀನಿ ಯಾರು ಬರೆದಿದ್ದು ಅಂತ ನಿಮಗೇನರ ಗೊತ್ತಿದ್ದರ ಹೇಳ್ರಿ.. ಅಂದಂಗ ಇದು..ತಾರೆ ಜಮೀನ್ ಪರ್‍ ಚಿತ್ರದ..ಮೇರಿ ಮಾ ರಿಮಿಕ್ಸ..

ಅವ್ವಾ ನೀ ಚೂಡ ಮಾಡಿಟ್ಟಿರು
ಸಂಜೀಕ ಬಂದು ತಿಂತೀನಿ ನಾ
ಈಗ ಬರೀ ಚಹಾ ಕುಡೀತೀನಿ ನಾ
ಸಕ್ಕರೀ ಬಾಳss ಕಮ್ಮಿ ಹಾಕು ನೀ..
ನಿನಗೆಲ್ಲಾ ಗೊತೈತೀ ನಮ್ಮವ್ವಾ...ನಿನಗೆಲ್ಲಾ ಗೊತ್ತೈತೀ ನಮ್ಮವ್ವಾ..

ಕಾಲೇಜ್ ಕಡೆ ತಿರುಗಲಿಕ್ಕೆ ಹೋಗತೀನಿ ನಾ
ಎಂಟು ಒಂಭತ್ತಕ್ಕ ಬರತೀನಿ ನಾ..
ದಾರ್‍ಯಾಗ ಮತ್ಯಾರರ ಸಿಕ್ಕರ...
ಹತ್ತು ಹನ್ನೊಂದುಕ್ಕ ಬರತೀನಿ ನಾ...
ನೀ ಲೈಟ್ ಆರಿಸಿ ಮೊಕ್ಕೊ ನಮ್ಮವ್ವಾ...
ನೀ ಬಾಗಿಲಾ ಹಾಕಿ ಮೊಕ್ಕೋ......ನಮ್ಮವ್ವಾ.

ನಿನಗೇನರss ತ್ರಾಸಾದರss
ನನಗ ಸಂಕಟsss ಆಗತೈತಿ ನೋಡು ಯವ್ವಾ
ಬೋರಾದರ ಟಿವಿ ನೋಡು
ಅಶ್ಟರಾಗ ನಾ ಬರ್ತಿನಿ ನೋಡೆವ್ವ ನೀ...

ಅವ್ವಾ ನೀ ಚಪಾತಿ ಮಾಡಿಟ್ಟಿರು..
ರಾತ್ಯ್ರಾಗ ಬಂದು ಉಂತೀನಿ ನಾ..
ನಾಳಿಗೆ ಲಘುನss ಏಳಬೇಕು ನಾ
ಅಲರಾಮು ಇಟ್ಟು ಮೊಕ್ಕೊ ಯವ್ವಾ ನಿ...
ನಿನಗೆಲ್ಲಾ ಗೊತೈತೀ ನಮ್ಮವ್ವಾ...
ನಿನಗೆಲ್ಲಾ ಗೊತೈತೀ ....... ನಮ್ಮವ್ವಾ...

ನಿಮ್ಮ,
ಗಿರೀಶ ರಾಜನಾಳ.

Thursday, May 13, 2010

ಮುಂಗಾರು ಮಳೆ ಸಂಭಾಷಣೆ ಐ.ಟಿ ನೌಕರನ ಮಾತಲ್ಲಿ.

Ganesh's Mungaaru Male Hero DIALOUGE IF HE IS WORKING IN MNC... (May be with lady Manager!!!)

ನಿಮ್ಮ ಟ್ರೇನಿಂಗು, ನಿಮ್ಮ ಪ್ರೊಜೆಕ್ಟು, ನಿಮ್ಮ ಮಾತು, ನಿಮ್ಮ ಆನ್ಸೈಟು,ಈ ಬಿಕನಾಸಿ ಅಪ್ರೈಸಲ್ಲು, ಆ ಸುಪರ್‍ವೈಸರ್‍ ಬೈಗುಳ,ಆ ಟಾರ್ಗೆಟ್ಸು, ಆ ಟೀಮ್ ಮೀಟಿಂಗ್ಸು,ಅದರಜ್ಜಿ ಕಸ್ಟಮರ್‍ ಫೋನ್ ಮಾಡೋ ಸದ್ದು ಎಲ್ಲಾ ಸೇರಿ ನನ್ನ ಕರಿಯರ್‍ ನಲ್ಲಿ ರಿಪೇರಿ ಮಾಡಕ್ಕಾಗ್ದೆ ಇರುವಷ್ಟು ಗಾಯ ಮಾಡಿಬಿಟ್ಟಿದೆ ಕಣ್ರಿ.

ನಂಗೊತ್ತಾಯ್ತು ಕಣ್ರಿ ನಂಗೆ ಹೈಕ್ ಸಿಗಲ್ಲಾ ಅಂತ..ಬಿಟ್ಕೊಟ್ಬಿಟ್ಟೆ ಕಣ್ರಿ...
ಕತ್ತೆ ತರ ದುಡಿದು ’ಅಸೋಸಿಯೇಟ್ ಆಫ್ ದ ಇಯರ್‍’ ಅನ್ನಿಸಿಕೊಳ್ಳೋದಕ್ಕಿಂತ ಒಬ್ಬ ಡೀಸೆಂಟ್ ಪರ್ಫಾರ್ಮರ್‍ ಆಗಿ ಇದ್ದುಬಿಡಬೇಕು ಅಂತ ಅನಿಸಿಬಿಟ್ಟಿದೆ ಕಣ್ರಿ..ಆದರೆ ಒಂದು ವಿಷ್ಯ ನೆನಪಿಟ್ಟುಕೊಳ್ಳಿ ನನಷ್ಟು ಈ ಕೆಲಸಾನ ಇಷ್ಟು ನೀಯತ್ತಾಗಿ ಮಾಡೋರು ಈ ಇಂಡಸ್ಟ್ರೀನಲ್ಲೇ ಯಾರು ಸಿಕ್ಕಲ್ಲಾ ಕಣ್ರಿ..

ಥ್ಯಾಂಕ್ಸ ಕಣ್ರಿ , ಅಪ್ರೈಸಲ್ ವಿಷ್ಯದಲ್ಲಿ ನನ್ ಕಣ್ತೆರೆಸಿದ ದೇವತೆ ಕಣ್ರಿ ನೀವು..ಈ ಕಣ್ಣು ಕ್ಲೋಸ್ ಆಗಿ ಮಣ್ಣು ಸೇರಿದ್ಮೇಲೂ, ನಾನು ಈ ಉಪಕಾರಾನ ಮರೆಯಲ್ಲ ರೀ...ಒಳ್ಳೆ ರೇಟಿಂಗ್ ಸಿಗಲಿಲ್ಲಾ ಅಂತ ನನಗೆನು ಬೇಜಾರ್‍ ಇಲ್ಲಾ ರೀ...ನಿಮ್ಮ ಪ್ರೊಜೆಕ್ಟನಲ್ಲಿದ್ದಾಗ ಕೊಟ್ರಲ್ಲಾ ಆ ನೂರು(೧೦೦)ದಿನಗಳು, ಅಷ್ಟು ಸಾಕು ಕಣ್ರಿ ಅದೇ ನೆನಪಲ್ಲಿ ಈ ಜೀವನ ತಳ್ಳಿ ಬಿಡ್ತೀನಿ..

ಲೈಫಲ್ಲಿ ಈ ಲೆವೆಲ್ಲಿಗೆ ಕನ್ಫೂಸ್ ಆಗಿದ್ದು ಇದೆ ಮೊದ್ಲು ಕಣ್ರೀ..ಎಲ್ಲಾ ನಿಮ್ಮ ಆಶಿರ್ವಾದ...
ಅರ್ಥ ಆಗಲಿಲ್ಲವಾ? ಆಗೋದು ಬೇಡಾ ಬಿಡಿ...